ನೆರೆ

ಮೊನ್ನೆ ಸುರಿದ ಭಾರಿ ಮಳೆಗೆ
ಮನೆ-ಮನೆಗಳು ಒಡೆದು
ಬಯಲು ಆಲಯವಾಯ್ತು
ಸುತ್ತಿ ಸುಳಿದು ತಿರುಗಿದ ಇತಿಹಾಸ
ಗಿರಿಗಿಟ್ಟಿಯಾಗಿ ಆಕಾಶ ನದಿ ಹಳ್ಳ
ಕೊಳ್ಳಗಳು ವಿಕಾರಗಳಾದವು.

ಅನ್ನ, ಹಸಿವು ನೀರು ನೀರಡಿಕೆ
ಕರುಳಿಗೆ ಅಂಟಿಕೊಂಡ ಮಕ್ಕಳು
ದಿಕ್ಕು ದಿಸೆಯಿಲ್ಲದ ಅಲೆಮಾರಿ ಬದುಕು
ಹರಿದ ನೀರಿಗೆ ನಿದ್ದೆಬಾರದೇ
ಹೊರಳಾಡಿದ ರಾತ್ರಿಗಳು ಚಿಂದಿ
ಮನಸ್ಸುಗಳು ತೋಯ್ದು ತಪ್ಪಡಿ ಮುದ್ದೆಯಾಯಿತು.

ಸ್ಮಶಾನದ ಸಂಜೆ ಕೆಟ್ಟ ಗಾಳಿ ಬೀಸಿ
ಚಳಿಗೆ ಥರಗುಟ್ಟಿವೆ ಕೂಸು ಕುನ್ನಿಗಳು
ಕಣ್ಣ ತುಂಬ ಕಂಬನಿ ಹೊತ್ತ ಜೀವ ಭಯ
ಸಾವಿಗೆ ಹೆದರಿದ ಮೂಕ ಮರ್ಮರ
ವಿಶಾಲ ಬಯಲಿನ ತುಂಬ ಹೆರಿಗೆ ಮನೆ
ನೋವು ಸಂಕಟಗಳು ಹರಿಕೊಂಡವು.

ಬಾಡಿಗೆಗೆ ಮನೆಮಠವಿಲ್ಲ ಶಾಲೆಗಳಿಲ್ಲ
ಕರ್ಫೂ ತುಂಬಿದ ದಿನಗಳು ಚಾಕರಿಗೆ
ಬೇಕಿಲ್ಲ ಗಂಜೀ ಕುದಿಸಲು ಕಟ್ಟಿಗೆ ಇಲ್ಲ
ಹೊದೆಯಲು ವಸ್ತ್ರವಿಲ್ಲ, ಹುಣ್ಣುಗಳ
ಗಾಯಕ್ಕೆ ಮುಲಾಮು ಸವರುವವರ್‍ಯಾರು
ಪ್ರಜಾಪ್ರಭುತ್ವಕ್ಕೆ ಬೇಗ ಪ್ರಾರ್ಥನೆಯ ಭಾಷೆ ತಿಳಿಯುವುದಿಲ್ಲ.

ನೀರಲಿ ತೇಲಿದ ಮನೆ ಮಠ ಗುಡಿ
ಬಟ್ಟೆಯೇ ಹೊದಿಸದ ಹೆಣಗಳು
ಅರ್ಧ ದಾರಿಯಲಿ ಬಿಟ್ಟು ಹೋದವರ ಗೋಳು
ಮನೆ ಗೂಡಿ ಮುರಿದು ಬಿದ್ದಿವೆ ಹಕ್ಕಿಗಳು
ಹಸಿರು ಕಾಣದೇ ಎತ್ತಲೋ ಹಾರಿ ಹೋಗಿವೆ
ಮೋಡಗಳು ಕಣ್ಣೀರು ಸುರಿಸುವುದ ನಿಲ್ಲಿಸಲಿ
ನಾವು ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪ ಪಡೋಣ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಸುಬೆಳಕಲಿ ಮುತ್ತಿತು ಚಂದ್ರನ ರಾಹು
Next post ಕಾಲ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys